ಬೆಸುಗೆ-ವಸುಗೆ

ಯಾವ ಶುಭಗಳಿಗೆಯಲಿ
ಪ್ರಕೃತಿ ತಾನುದೆಯಿಸಿತೊ
ಆವ ಶುಭ ವೇಳೆಯಲಿ
ಜೀವ ಕಣ್ ತೆರೆಯಿತೊ
ಅಮೃತ ಸೆಲೆ ನೆಲೆಯಂತೋ ದಯವಲೀಲೆ ||ಪ||

ಶುಭೋದಯದ ಹಗಲಿರುಳಿನಲಿ
ನವೋದಯದ ಬಾಳ ಬೆಳಕು
ಬೆಸುಗೆ ವಸುಗೆಯಲೆಂತೋ ಸಗ್ಗ ಸುಭಗ ||ಅ.ಪ||

ಈ ಮಣ್ಣು ಕಣ ಕಣದಿ
ಹರಿವ ತೊರೆ ನದನದಿ ರವದಿ
ಅಲೆಯಲೆಯ ಅನಿಲದಲಿ ದೇವ ನೋಟ
ಚಿಗುರು ತಂಬೆಲರಲ್ಲಿ
ಸುಮ ಚೆಲ್ವರಿದ ಸಿರಿಯಲ್ಲಿ
ಕಣ್ಣ ಕಾಂತಿಗೆ ನಿತ್ಯ ಹಬ್ಬದೂಟ

ಅಂಗಲಂಗುಲದಲ್ಲಿ
ಬಾಂದಳದ ಬಿನ್ನಾಣ
ಕುಣಿ-ಕುಣಿವ ಮನಗಳಲಿ ಹರಿಣಿ ಬಿಂಬ
ಏರು ಜವ್ವನದಲ್ಲಿ
ಶೃಂಗಾರದಂದಣದಿ
ತನ್ನ ತಾ ಮರೆವಂಥೆ ಷೋಡಷ ಬಿಂಬ

ನೆಲ ಮುಗಿಲ ಹರಹಿನಲಿ
ಬಾಳ್ಬಳ್ಳಿ ಹರಡಿರಲು
ಅಂಕು ಡೊಂಕಿನ ಹಾದಿ ಮುಳ್ಳ ಭೀತಿ ಏಕೆ
ತೆರೆದ ಗಣ್ಣಿನ ಮನಕೆ
ನೊರೆಯ ಹಾಲಿನ ಗುಣಕೆ
ಹೆಪ್ಪುಗಟ್ಟಿಸಿದರೂ ನವನೀತವಾಗೋ ಚಣಕೆ.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಕ್ರೋಶ
Next post ತಂಗಾಳಿ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys